Mandya: ಹೆಂಡತಿಗೆ ಮೊಬೈಲ್‌ ಗೀಳು, ಅನೈತಿಕ ಸಂಬಂಧದ ಶಂಕೆ; ಕೊಲೆ ಮಾಡಿ ನದಿಗೆಸೆದ ಗಂಡ

Mandya news husband killed wife for excessive smartphone use in mandya

Mandya: ಮದುವೆ ಎಂದರೆ ಇಲ್ಲಿ ಗಂಡ ಹೆಂಡತಿಯ ಅನ್ಯೋನ್ಯತೆ ಬಹಳ ಮುಖ್ಯ. ಆದರೆ ಇಲ್ಲೊಬ್ಬಾಕೆ ತನ್ನ ಗಂಡನಿಗಿಂತ ಮೊಬೈಲ್‌ ಜೊತೆನೇ ಅನ್ಯೋನ್ಯತೆ ಬೆಳೆಸಿಕೊಂಡು ಈಗ ಕೊಲೆಯಾಗಿರುವ ಘಟನೆ ನಡೆದಿದೆ. ಹೌದು. ಮೊಬೈಲ್‌ ಗೀಳು ಈ ಮಹಿಳೆಯ ಜೀವವನ್ನೇ ತೆಗೆದಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡುತ್ತಾ, ಸ್ನೇಹಿತರೊಂದಿಗೆ ಚಾಟ್‌ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದ ಹೆಂಡತಿಯ ಮೇಲೆ ಗಂಡನಿಗೆ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದೆ. ಈ ಕಾರಣಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.

ಈ ಘಟನೆ ಮಂಡ್ಯ( Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲುವಿನಲ್ಲಿ ನಡೆದಿದೆ. ಶ್ರೀನಾಥ್‌ (33) ಹಾಗೂ ಪೂಜಾ ಪ್ರೀತಿಸಿ ಮದುವೆಯಾಗಿದ್ದರು. ಈಗ ಪೂಜಾ (26) ಈಗ ಗಂಡನಿಂದಲೇ ಕೊಲೆಯಾಗಿದ್ದಾಳೆ. ಪತ್ನಿಯ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಂದಿರುವ ವರದಿಯಾಗಿದೆ.

ಒಂಭತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಇವರು, ಮೊದಲ ಕೆಲ ವರ್ಷ ಚೆನ್ನಾಗಿಯೇ ಇದ್ದರು. ಈ ದಂಪತಿಗೆ ಹೆಣ್ಣು ಮಗು ಇದೆ. ಮೊದಲಿನಿಂದಲೂ ಮೊಬೈಲ್‌ ಪ್ರೇಮಿಯಾದ ಪೂಜಾ, ಅದರಲ್ಲಿ ಟಿಕ್‌ಟಾಕ್‌, ಇನ್ಸ್‌ಟಾಗ್ರಾಮ್‌ ರೀಲ್ಸ್‌ ಎಂದು ಮಗ್ನರಾಗಿರುತ್ತಿದ್ದಳು. ಅತಿಯಾಗಿ ಫೋನ್‌ ಬಳಕೆ ಮಾಡುತ್ತಿದ್ದರಿಂದ ಗಂಡ ಹೆಂಡತಿ ನಡುವೆ ಸಾಮಾನ್ಯವಾಗಿ ಜಗಳವಾಗುತ್ತಿತ್ತು. ಹಾಗಾಗಿ ಗಂಡನಿಗೆ ಈಕೆಗೆ ಪರಪುರುಷನೊಂದಿಗೆ ಸಂಬಂಧ ಇರಬಹುದು ಎಂದು ಶಂಕೆ ಮೂಡಿದೆ. ಈ ಕೊಲೆ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ನಂತರ 102ಕ್ಕೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಇನ್ನೂ ವಿಚಿತ್ರವೆಂದರೆ ಮಗಳ ಶವವನ್ನು ಸಾಗಿಸಲು ಅಳಿಯನೊಂದಿಗೆ ಸೇರಿ ತಂದೆ ಕಾವೇರಿ ನದಿಗೆ ಎಸೆದಿದ್ದಾರೆ. ಶವಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದಿದ್ದಾರೆ. ಮಗಳನ್ನು ಕೊಲೆಗೈದ ಶ್ರೀನಾಥ್‌ ಮಾವನಿಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾನೆ. ಆದರೆ ಮಗಳ ಕೊಲೆ ಬಗ್ಗೆ ಹೇಳಿದರೂ ಪೊಲೀಸರಿಗೆ ಹೇಳದೆ ಅಳಿಯನಿಗೆ ಶವ ಸಾಗಿಸುವಲ್ಲಿ ಜೊತೆಯಾಗಿದ್ದಾನೆ ಮಾವ.

ಇದನ್ನೂ ಓದಿ: ಜಾಮೂನಿಗೆ ವಿಷ ಹಾಕಿ ತನ್ನ ಮಕ್ಕಳಿಗೆ ತಿನ್ನಿಸಿದ ಪಾಪಿ ಅಪ್ಪ! ಕಾರಣವೇನು ಗೊತ್ತೇ?

Leave A Reply

Your email address will not be published.