Vijayalakshmi Darshan: ದರ್ಶನ್‌ ಬಿಡಿಸಲು ಪತ್ನಿಯೇ ಖುದ್ದು ಎಂಟ್ರಿ, ಖ್ಯಾತ ವಕೀಲರನ್ನು ಕಾನೂನು ಹೋರಾಟಕ್ಕೆ ಇಳಿಸಲು ಪತ್ನಿ ವಿಜಯಲಕ್ಷ್ಮಿಯ ಮಾಸ್ಟರ್ ಪ್ಲಾನ್ !

Vijayalakshmi Darshan: ದರ್ಶನ್‌ ಬಿಡಿಸಲು ಪತ್ನಿಯೇ ಖುದ್ದು ಎಂಟ್ರಿ, ಖ್ಯಾತ ವಕೀಲರನ್ನು ಕಾನೂನು ಹೋರಾಟಕ್ಕೆ ಇಳಿಸಲು ಪತ್ನಿ ವಿಜಯಲಕ್ಷ್ಮಿಯ ಮಾಸ್ಟರ್ ಪ್ಲಾನ್ !

 

ನಟ ದರ್ಶನ್ ತನ್ನ ಗೆಳತಿ ಪವಿತ್ರಾ ಗೌಡರ ಸಹವಾಸದಿಂದಾಗಿ ಇದೀಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಕೇವಲ ತನ್ನ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕಾಗಿ ಚಿತ್ರದುರ್ಗದ ಮೆಡಿಕಲ್ ಶಾಪಿನ ಉದ್ಯೋಗಿ ರೇಣುಕಾಸ್ವಾಮಿ ಎನ್ನುವವರನ್ನು ಅನಾಮತ್ತಾಗಿ ಬ್ರಾಯ್ಲರ್ ಕೋಳಿ ಮೂಲೆಗೆ ಎಸೆದಂತೆ ಎಸೆದು ಬಿಟ್ಟಿದ್ದರು. ಅಚಾತುರ್ಯವಾಗಿಯೇನೋ ಎಂಬಂತೆ ಕೊಲೆ ನಡೆದು ಹೋಗಿತ್ತು. ಇದೀಗ ಕೊಲೆ ಮಾಡಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.

ದರ್ಶನ್ ಜೈಲು ಸೇರಿ ಇದೀಗ ವಾರಗಳಾಗುತ್ತಾ ಬಂದಿದೆ. ಇಷ್ಟು ದಿನ ಸುಮ್ಮನಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಏಕಾಏಕಿ ಫೀಲ್ಡ್ ಗೆ ಇಳಿದಿದ್ದಾರೆ. ಕೊಲೆ ಕೇಸು ಆಳಕ್ಕೆ ಇಳಿಯುತ್ತಿದ್ದಂತೆ ಉರುಳು ದರ್ಶನ್ ಕುತ್ತಿಗೆಗೆ ಸುತ್ತಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ. ಈ ಕ್ಷಣದಲ್ಲಿ ಸ್ವತಹ ಪತ್ನಿ ಗಂಡನ ರಕ್ಷಣೆಗೆ ನಿಂತಿದ್ದಾಳೆ. ಗಂಡನ ಪರವಾಗಿ ಕಾನೂನು ಹೋರಾಟಕ್ಕೆ ಆಕೆ ಮುಂದಾಗಿದ್ದಾರೆ. ಪತಿ ಪರವಾಗಿ ವಾದ ಮಾಡುವಂತೆ ಖ್ಯಾತ ವಕೀಲರನ್ನು ಭೇಟಿಯಾಗಿದ್ದಾರೆ. ದರ್ಶನ್ ಪರವಾಗಿ ವಾದ ಮಾಡುವಂತೆ ಹಿರಿಯ ವಕೀಲ ಸಿ ವಿ ನಾಗೇಶ್ ರನ್ನು ಆಕೆ ಮನವಿ ಮಾಡಿದ್ದಾರೆ.

ಹೌದು, ಹೈಕೋರ್ಟ್ ಹಿರಿಯ ವಕೀಲರಾದ ಸಿ ವಿ ನಾಗೇಶ್ ಅವರನ್ನು ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ ಎಂಬ ಸುದ್ದಿ ಇದೀಗ ಹರಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಸ್ಟಾರ್ ನಟ ದರ್ಶನ್ ರ ಪರವಾಗಿ ಸಿ ವಿ ನಾಗೇಶ್ ವಾದ ಮಾಡುವ ಎಲ್ಲಾ ಸಾಧ್ಯತೆಯಿದೆ. ಪ್ರಕರಣದಲ್ಲಿ ಈಗಾಗಲೇ 19 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಯಾದರೂ ಕೇವಲ ದರ್ಶನ್ ಪರ ಮಾತ್ರ ವಾದ ಮಾಡಲು ವಿಜಯಲಕ್ಷ್ಮಿ ತೀರ್ಮಾನ ಮಾಡಿದ್ದಾರೆ ಎನ್ನುತ್ತಿದೆ ಒಂದು ವರದಿ. ತನ್ನ ಪತಿ ದರ್ಶನ್ ಹೊರತುಪಡಿಸಿ ಬೇರೆಯವರ ಪರ ವಾದ ಮಂಡನೆ ಮಾಡದಂತೆ ಕೂಡಾ ಮನವಿ ಮಾಡಿದ್ದಾರೆ. ಆ ಮೂಲಕ ತಮ್ಮ ಪತಿ ದರ್ಶನ್ ಸೇಫ್ ಆಗಬೇಕು, ಉಳಿದವರು ಲಾಕ್ ಆದರೆ ಆಗಲಿ ಅನ್ನುವುದು ಆಕೆಯ ಯೋಚನೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಷ್ಟು ದಿನ ಸುಮ್ಮನಿದ್ದರೂ ಇದೀಗ ಕೊನೆಯ ಕ್ಷಣದಲ್ಲಿ ಓರ್ವ ಸಾಮಾನ್ಯ ಪತ್ನಿಯಾಗಿ ಗಂಡನ ರಕ್ಷಣೆಗೆ ನಿಲ್ಲುವ ಹೆಂಗಸಾಗಿ ದರ್ಶನ್ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಬೇರೊಬ್ಬ ಹೆಂಗಸಿಗಾಗಿ ಗಂಡ ಜೈಲು ಪಾಲಾದಾಗ ವಿಜಯಲಕ್ಷ್ಮಿ ಸಹಜವಾಗಿ ಕೋಪಗೊಂಡಿದ್ದರು. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ಅರೆಸ್ಟ್ ಆದ ದಿನವೇ ಡಿಪಿ ತೆಗೆದಿದ್ದರು, ನಂತ್ರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದರು. ಇದೀಗ ಇನ್‌ಸ್ಟಾಗ್ರಾಮ್ ಆಕ್ಟಿವ್ ಆಗಿದೆ. ಗಂಡನಿಗಾಗಿ ಕಾನೂನು ಹೋರಾಟಕ್ಕೆ ಅರ್ಧಾಂಗಿ ಸಿದ್ಧರಾಗಿದ್ದಾರೆ.

ಮೃತ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಅಲ್ಲದೆ ಪಬ್ಲಿಕ್ ಕ್ಲಾಸಿಕ್ಯೂಟರ್ ಆಗಿ ಪ್ರಭಾವಿ ಚತುರ ಲಾಯರ್ ನೇಮಕವಾಗಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ಸ್ಟ್ರಾಂಗ್ ಆಗಲಿದ್ದು, ಇದೇ ಕಾರಣಕ್ಕೆ ವಿಜಯಲಕ್ಷ್ಮಿ ಅವರು ಖ್ಯಾತ ವಕೀಲರನ್ನು ಪ್ರಕರಣದಲ್ಲಿ ವಾದ ಮಾಡಲು ಕರೆತರುತ್ತಿದ್ದಾರೆ. ತಾರ್ಕಿಕವಾಗಿ ವಾದ ಹೂಡಿ ದರ್ಶನ್ರನ್ನು ಬಹುಬೇಗ ಈ ಕೇಸಿನಿಂದ ಹೊರಕ್ಕೆ ತರುವುದು ವಿಜಯಲಕ್ಷ್ಮಿ ಉದ್ದೇಶ.

 

Leave A Reply

Your email address will not be published.