ದರ್ಶನ್ ಭೇಟಿಗೆ ಬಂದರೆ ಪತ್ನಿ ವಿಜಯಲಕ್ಷ್ಮಿ? ಕರಗಿತೆ ಸಿಟ್ಟು ?

ದರ್ಶನ್ ಭೇಟಿಗೆ ಬಂದರೆ ಪತ್ನಿ ವಿಜಯಲಕ್ಷ್ಮಿ? ಕರಗಿತೆ ಸಿಟ್ಟು ?

ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ.

ಪತಿ ದರ್ಶನ್​​ ಅವರ ಕುರಿತಾಗಿ ಕೊಲೆ ಆರೋಪ ಕೇಳಿ ಬರುತ್ತಿದ್ದಂತೆ ವಿಜಯಲಕ್ಷ್ಮಿ ಅವರು ಇನ್​ಸ್ಟಾಗ್ರಾಮ್​ ಪ್ರೊಫೈಲ್‌​ ಫೋಟೋ ಡಿಲೀಟ್ ಮಾಡಿ ದರ್ಶನ್ ಅವರನ್ನು ಅನ್​ಫಾಲೋ ಮಾಡಿದ್ದರು. ಆದರೆ ಮತ್ತೆ ಸೋಶಿಯಲ್​​ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪತಿ ಅರೆಸ್ಟ್​ ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ, ದರ್ಶನ್ ಮೇಲೆ ಪತ್ನಿ ಕೋಪಗೊಂಡಿರಬೇಕು ಎನ್ನುವ ಮಾತು ಇತ್ತು. ದರ್ಶನ್​ ಬಂಧನವಾಗಿ 9 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಪತಿಯನ್ನು ನೋಡಲು ವಿಜಯಲಕ್ಷ್ಮಿ  ಪೊಲೀಸ್​​​ ಠಾಣೆಗೆ ಬಂದಿದ್ದಾರೆ.

ಇದೀಗ ಪತಿಯನ್ನು ನೋಡಲು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಬಂದಿದ್ದಾರೆ. ಪತಿ ಜತೆ ಮಾತನಾಡಲು ಅಧಿಕಾರಿಗಳ ಬಳಿ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ.

 

Leave A Reply

Your email address will not be published.