ಈ ಟೆಸ್ಟ್ ಮಾಡಿಸಿದರೆ ದರ್ಶನ್ ಎಲ್ಲವನ್ನು ಹೇಳಿ ಸತ್ಯ ಹೊರಬಿಳುತ್ತಂತೆ!

ಈ ಟೆಸ್ಟ್ ಮಾಡಿಸಿದರೆ ದರ್ಶನ್ ಎಲ್ಲವನ್ನು ಹೇಳಿ ಸತ್ಯ ಹೊರಬಿಳುತ್ತಂತೆ!

 

ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಿವೃತ್ತ ಹಿರಿಯ ಪೊಲೀಸ್​ ಅಧಿಕಾರಿ ಸಂಗ್ರಾಮ್ ಸಿಂಗ್, ದರ್ಶನ್​ಗೆ ಮತ್ತು ಇತರೆ ಆರೋಪಿಗಳನ್ನು ನಾರ್ಕೋ ಅನಾಲಿಸಿಸ್​ ಟೆಸ್ಟ್​ಗೆ ಒಳಪಡಿಸಿದರೆ, ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ  .

‘ನಾರ್ಕೋ ಅನಾಲಿಸಿಸ್​​ಗೆ ಒಳಪಡಿಸಿದ್ರೆ, ಅವರು ಸತ್ಯ ಬಾಯ್ಬಿಡಬಹುದು. ಇದರಲ್ಲಿ ನಾಲ್ಕರಿಂದ ಐದು ರೀತಿಯ ಟೆಸ್ಟ್​ಗಳಿವೆ. ಇದನ್ನು ಹಿರಿಯ ವೈದ್ಯರು ಅಥವಾ ಅವರ ಆಸ್ಪತ್ರೆಗಳಲ್ಲಿ ನಡೆಸುತ್ತಾರೆ. ಈ ಕೇಸ್​ನಲ್ಲಿ ದರ್ಶನ್​ ಸದ್ಯ ಕಸ್ಟಡಿಯಲ್ಲಿದ್ದಾರೆ. ಒಂದು ಇಂಜೆಕ್ಷನ್ ಕೊಟ್ಟರೆ, ಅದರಲ್ಲಿ ದೊಡ್ಡ ಪ್ರಕ್ರಿಯೆಯೇ ಅಡಗಿದೆ. ಈ ಟೆಸ್ಟ್​ ಮಾಡುವ ಮುನ್ನ ವ್ಯಕ್ತಿಯ ದೇಹದಲ್ಲಿ ಬಿಪಿ, ಹಾರ್ಟ್​ಬೀಟ್ ರೇಟ್​​, ಕಿಡ್ನಿ ಇದೆಲ್ಲವನ್ನು ಪರೀಕ್ಷಿಸಿ, ನಂತರ ಎಷ್ಟು ಪ್ರಮಾಣದಲ್ಲಿ ಕೊಡಬಹುದು ಎಂದು ನಿರ್ಧರಿಸುತ್ತಾರೆ’. ಇದನ್ನು ಕೊಟ್ಟ ಬಳಿಕ ಆ ವ್ಯಕ್ತಿ ಏನೇನೋ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು‌ಹೇಳಿದ್ದಾರೆ.

 

Leave A Reply

Your email address will not be published.