ದರ್ಶನ್ ಜೈಲು ಮೆಟ್ಟಿಲು ಹತ್ತುವಾಗ ನಡೆದ ಘಟನೆ ಏನು ಗೊತ್ತೆ ? ಹೀಗೆಲ್ಲಾ ಆಯಿತು!
ದರ್ಶನ್ ಜೈಲು ಮೆಟ್ಟಿಲು ಹತ್ತುವಾಗ ನಡೆದ ಘಟನೆ ಏನು ಗೊತ್ತೆ ? ಹೀಗೆಲ್ಲಾ ಆಯಿತು!
![](https://hosavishya.com/wp-content/uploads/2024/06/n61900280317191276355661ed8031417e6d3337ff44a1295652c8e8a13ef6bf00e0cb0eb59555710720213.jpg)
ನಟ ದರ್ಶನ್ರ ಪೊಲೀಸ್ ಕಸ್ಟಡಿ ಅವಧಿ ಮುಗಿದು ಪರಪ್ಪನ ಅಗ್ರಹಾರ ಕಳುಹಿಸಿದಾಗ ನ್ಯಾಯಾಲಯದ ಮುಂದೆ ನೆರೆದಿದ್ದ ಅವರ ನೂರಾರು ಅಭಿಮಾನಿಗಳು ‘ಡಿ ಬಾಸ್ ಡಿಬಾಸ್’ ಎಂದು ಜೈಕಾರ ಕೂಗಿದರು.
ಕೋರ್ಟ್ ತೀರ್ಪಿನ ನಂತರ ನಟ ದರ್ಶನ್ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಪೊಲೀಸ್ ವಾಹನಕ್ಕೆ ಹತ್ತಿಸಲಾಯಿತು.ಈ ವೇಳೆ ಕೋರ್ಟ್ ಸುತ್ತಾ ದರ್ಶನ್ರ ನೂರಾರು ಅಭಿಮಾನಿಗಳು ನಟನನ್ನು ನೋಡಲು ಕಾದು ಕುಳಿತಿದ್ದರು.
ಅಭಿಮಾನಿಗಳು ಪೊಲೀಸ್ ವಾಹನಗಳನ್ನು ಹಿಂದೆಯೇ ಹೋದರು. ಇನ್ನೂ ಜೈಲಿನ ಸುತ್ತಾ ಡಿ ಬಾಸ್ ಅಭಿಮಾನಿಗಳನ್ನು ಕಂಟ್ರೋಲ್ ತರಲು ಲಘು ಲಾಠಿ ಚಾರ್ಜ್ ನಡೆಸಲಾಯಿತು.
ನಟ ದರ್ಶನ್ಗೆ ವಿಚಾರಣಾಧೀನ ಕೈದಿ ನಂಬರ್ 6106 ಸಂಖ್ಯೆ ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಹೆಚ್ಚಿನ ಭದ್ರತೆಗೆ ಬಿ ಬ್ಯಾರಕ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.