ಪುನೀತ್ ಆತ್ಮದ ಜೊತೆ ಮಾತನಾಡಿ ಈ ಮೂರು ಪ್ರಶ್ನೆ ಕೇಳಿದ ಗುರೂಜಿ! ಬಂದ ಉತ್ತರವೇನು ಗೊತ್ತೆ ?

ಪುನೀತ್ ಆತ್ಮದ ಜೊತೆ ಮಾತನಾಡಿ ಈ ಮೂರು ಪ್ರಶ್ನೆ ಕೇಳಿದ ಗುರೂಜಿ! ಬಂದ ಉತ್ತರವೇನು ಗೊತ್ತೆ ?

 

ಪುನೀತ್‌ ಇಲ್ಲವಾಗಿ ವರ್ಷಗಳು ಉರುಳಿದರೂ, ಇಂದಿಗೂ ಅವರನ್ನು ಜಪಿಸೋ ಅಭಿಮಾನಿಗಳಿದ್ದಾರೆ. ಅಗಲಿದ ಪುನೀತ್‌ ರಾಜ್‌ಕುಮಾರ್‌ ಜತೆಗೆ ಮಾತನಾಡುವ ಪ್ರಯತ್ನ ಮಾಡಿದ್ದಾರೆ ಜನ್ಮಾಂತರ ಖ್ಯಾತಿಯ ಆಧ್ಯಾತ್ಮಿಕ ಗುರು!

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ ಈ ಹಿಂದೆ ಸಿನಿಮಾ ಸೆಲೆಬ್ರಿಟಿಗಳು ಸೇರಿ ಗಣ್ಯರ ಅಕಾಲಿಕ ಸಾವಿನ ಹಿಂದಿನ ರಹಸ್ಯವನ್ನು ಅವರ ಆತ್ಮದ ಜತೆಗೆ ಮಾತನಾಡಿದ ಸಾಕಷ್ಟು ಉದಾಹರಣೆಗಳಿವೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆಯೂ ಅವರ ಆತ್ಮದ ಜತೆಗೆ ಮಾತನಾಡಿದ್ದರು. ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಜತೆಗೂ ಸಂಭಾಷಣೆ ನಡೆಸಿದ್ದಾರೆ ರಾಮಚಂದ್ರ ಗುರೂಜಿ.

ಯೂಟ್ಯೂಬ್‌ ಚಾನೆಲ್‌ ಜತೆಗಿನ ಸಂದರ್ಶನದಲ್ಲಿ ಭಾಗವಹಿಸಿದ ಶ್ರೀ ರಾಮಚಂದ್ರ ಗುರೂಜಿ, ಜನ್ಮಾಂತರಗಳ ಬಗ್ಗೆ ಸುದೀರ್ಘವಾಗಿ ಎರಡು ಗಂಟೆಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್‌ ನಿಧನರಾದ ಕೆಲವೇ ದಿನಗಳಲ್ಲಿ ಅವರ ಜತೆಗೆ ಶ್ರೀ ರಾಮಚಂದ್ರ ಗುರೂಜಿ ಸಂಭಾಷಣೆ ನಡೆಸಿದ್ದಾರೆ. ತಮ್ಮ ತಲೆಯಲ್ಲಿದ್ದ ಮೂರು ಪ್ರಶ್ನೆಗಳನ್ನು ಪುನೀತ್‌ ಆತ್ಮದ ಮುಂದಿಟ್ಟಿದ್ದರು. ಅದಕ್ಕೆ ಉತ್ತರವನ್ನೂ ಪಡೆದಿದ್ದಾರೆ.

ಅವರ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ವ್ಯಕ್ತವಾದವು. ಅದನ್ನು ತಿಳಿಯುವ ಉದ್ದೇಶಕ್ಕೆ, ನಮ್ಮ ಸಂಶೋಧನೆಯ ಭಾಗವಾಗಿ ನಾನು ವರ ಆತ್ಮದ ಜತೆಗೆ ಮಾತನಾಡಿದ್ದೆ. ಇದನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ” ಎಂದರು ಶ್ರೀ ರಾಮಚಂದ್ರ ಗುರೂಜಿ.

ನಿಮ್ಮ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಅವುಗಳು ನಿಜಾನಾ? ಎಂದೆ. ಅದಕ್ಕೆ ಉತ್ತರಿಸಿದ ಅವರು, “ಇಲ್ಲ ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಸತ್ತಿದ್ದೇನೆ..” ಎಂದು ಕ್ಲಿಯರ್‌ ಮಾಡಿದರು. ಅದಾದ ಬಳಿಕ ಈಗ ಎಲ್ಲಿದ್ದೀರಿ? ಎಂದೆ, ಆ ಪ್ರಶ್ನೆಗೆ ಉತ್ತರ ನೀಡಿದ ಅವ್ರು, “ನಾನೀಗ ನನ್ನ ತಂದೆ ತಾಯಿಯ ಹುಡುಕಾಟದಲ್ಲಿದ್ದೇನೆ..”ಎಂದು ರಾಮಚಂದ್ರ ಗುರೂಜಿ ಪ್ರಶ್ನೆಗೆ ಉತ್ತರ ನೀಡಿದರು.

ಈ ಎರಡು ಪ್ರಶ್ನೆಗಳ ಬಳಿಕ ಮರುಜನ್ಮದ ಬಗ್ಗೆ ರಾಮಚಂದ್ರ ಗುರೂಜಿ ಮೂರನೇಯದಾಗಿ, ಮರು ಜನ್ಮದ ಬಗ್ಗೆ ಪ್ರಶ್ನೆ ಮಾಡಿದರು. “ನೀವು ಮತ್ತೆ ಹುಟ್ಟಿ ಬರುತ್ತೀರಾ?” ಎಂದರು. ಅದಕ್ಕೆ ಪ್ರತಿಯಾಗಿ, “ಆ ಬಗ್ಗೆ ನಾನಿನ್ನೂ ಯೋಚನೆ ಮಾಡಿಲ್ಲ. ಒಂದು ವೇಳೆ ಮತ್ತೊಮ್ಮೆ ಹುಟ್ಟಿ ಬರುವುದೇ ಆದರೆ, ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆಂದು ಪುನೀತ್‌ ಸ್ಪಷ್ಟಪಡಿಸಿದರು.

Leave A Reply

Your email address will not be published.