ಜೈಲಿನಲ್ಲಿದ್ದ ದರ್ಶನ್ ಭೇಟಿಗೆ ಬಂದ ಮಂಗಳಮುಖಿ! ಬಂದಿದ್ದಾದರೂ ಏಕೆ ?

ಜೈಲಿನಲ್ಲಿದ್ದ ದರ್ಶನ್ ಭೇಟಿಗೆ ಬಂದ ಮಂಗಳಮುಖಿ! ಬಂದಿದ್ದಾದರೂ ಏಕೆ ?

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿದ್ದಾರೆ.ಇದೀಗ ಮಂಗಳಮುಖಿ ನಕ್ಷತ್ರ ದರ್ಶನ್ ಭೇಟಿಗೆಂದು ಜೈಲಿನ ಬಳಿ ಆಗಮಿಸಿದ್ದಾರೆ.

ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ದರ್ಶನ್
ಆಶ್ರಮದ ಕಟ್ಟಡ ನಿರ್ಮಾಣಕ್ಕೆ ನಟ ದರ್ಶನ ಆರ್ಥಿಕ ನೆರವು ನೀಡಿದ್ದಾರೆ ಎಂದಿದ್ದಾರೆ.
ನಮಗೆ ಅನ್ನ ನೀಡಿದ್ದಾರೆ ಹಾಗಾಗಿ ಭೇಟಿಗೆ ಬಂದಿದ್ದೇವೆ. ಅವಕಾಶ ಸಿಕ್ಕರೆ ನಟ ದರ್ಶನ್ ರನ್ನು ಭೇಟಿ ಮಾಡುತ್ತೇನೆ ಎಂದು ನಮ್ಮನೆ ಸುಮ್ಮನೆ ಆಶ್ರಮ ಟ್ರಸ್ಟ್ ನ ಫೌಂಡರ್ ನಕ್ಷತ್ರ ಹೇಳಿದ್ದಾರೆ.

ರೇಷನ್​ನಿಂದ ಹಿಡಿದು ನಮಗೆ ಕಷ್ಟ ಇದ್ದ ಟೈಮ್​ನಲ್ಲಿ ಅವರು ನಮ್ಮ ಜೊತೆ ನಿಂತಿದ್ದರು. ತಪ್ಪು ಮಾಡಿದವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲಿ. ಯಾವತ್ತೂ ಯಾರ ಮನೆಯಲ್ಲಿ ಅನ್ನ ತಿಂದರೂ ಮರೆಯಬಾರದು ಎಂದು ನಕ್ಷತ್ರ ಹೇಳಿದ್ದಾರೆ.

 

 

 

Leave A Reply

Your email address will not be published.